ಬೆಳಗಾವಿ: ಕಳೆದ ನಾಲ್ಕು ದಿನದ ಹಿಂದೆ ಶಾಲೆಯಲ್ಲಿ ಮಕ್ಕಳು ಗಲಾಟೆ ಮಾಡಿದ್ದಾರೆ ಎಂದು ಜಹೀರ್ ಅಬ್ಬಾಸ್ ಹುಕ್ಕೇರಿ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿದ್ದಾರೆ ಎಂದು ಹಲ್ಲೆಗೊಳಗಾದ ಜಹೀರ್ ಸ್ನೇಹಿತ ಸಂಜು ವಾಜಂತ್ರಿ ಹೇಳಿದರು.
ಮಕ್ಕಳ ಸಲುವಾಗಿ ಹೊಡೆದಾಟ ಜಹೀರ್ ಅಬ್ಬಾಸ್ ಗೆ ಕಲ್ಲಿನಿಂದ ಹೊಡೆತ! ಶಾಲೆಯಲ್ಲಿ ಮಕ್ಕಳ ಗಲಾಟೆ ಹಿನ್ನೆಲೆಯಲ್ಲಿ ಪೋಷಕರು ಮಾರಾಮಾರಿ ನಡೆಸಿದ ಘಟನೆ ಬೆಳಗಾವಿ ನ್ಯಾಯಾಲಯದ ಸಮೀಪ ಸೋಮವಾರ ನಡೆದಿದೆ.
ನ್ಯಾಯಾಲಯದಲ್ಲಿ ಮೊಕದ್ದಮೆ ಇದ್ದ ಹಿನ್ನೆಲೆಯಲ್ಲಿ ನ್ಯಾಯಲಯಕ್ಕೆ ಹಾಜರಾಗಿದ್ದ ವೇಳೆ ಏಕಾಏಕಿ ಇಬ್ಬರ ತಂಡ ಹಲ್ಲೆ ಮಾಡಿದ್ದಾರೆ.
ಸೋಯಲ್ ಇನಾಮದಾರ ಸೇರಿಕೊಂಡು ಜಹೀರ್ ಅಬ್ಬಾಸ್ ಹುಕ್ಕೇರಿ ಮೇಲೆ ಕಲ್ಲು, ಇಟ್ಟಂಗಿಲೇ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಜಹೀರನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವರದಿ: ಸಿದ್ದು ಅರಭಾವಿ ಕ್ರಾಂತಿ ಕರ್ನಾಟಕ ನ್ಯೂಸ್ ಬೆಳಗಾವಿ
Recent Comments