ಮಹಾರಾಷ್ಟ್ರ-ಕರ್ನಾಟಕ ಎರಡು ರಾಜ್ಯಗಳ ನಡುವಿನ ಬಸ್ ಸಂಚಾರ ಸ್ಥಗಿತ

ಕ್ರಾಂತಿ ಕರ್ನಾಟಕ ನ್ಯೂಸ್
ಬೆಳಗಾವಿ: ಮರಾಠಿ ಮಾತನಾಡದ್ದಕ್ಕೆ ಸಾರಿಗೆ ಸಂಸ್ಥೆ ನಿರ್ವಾಹಕನ ಮೇಲೆ ಹಲ್ಲೆ ಪ್ರಕರಣ ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗದಲ್ಲಿ ತೀವ್ರಗೊಂಡ ಪ್ರತಿಭಟನೆ ಮಹಾರಾಷ್ಟ್ರ-ಕರ್ನಾಟಕ ಎರಡು ರಾಜ್ಯಗಳ ನಡುವಿನ ಬಸ್ ಸಂಚಾರ ಸ್ಥಗಿತ
ಪೊಲೀಸರ ಸಲಹೆ ಮೇರೆಗೆ ನಿನ್ನೆ ಸಂಜೆ 7 ಗಂಟೆಯಿಂದ ಸಂಪೂರ್ಣ ಸಂಚಾರ ಸ್ಥಗಿತ ಕರ್ನಾಟಕದ ಕಡೆಯಿಂದ ಮಹಾರಾಷ್ಟ್ರಕ್ಕೆ ಹೋಗುವ ಬಸ್ ಗಳು ಸಂಚಾರ ಸ್ಥಗಿತ, ಕರ್ನಾಟಕದ ಬಸ್ ಗಳು ಮಹಾರಾಷ್ಟ್ರದ ಗಡಿಯವರಿಗೆ ಮಾತ್ರ ಸಂಚಾರ, ಮಹಾರಾಷ್ಟ್ರದ ಬಸ್ ಗಳು ಕರ್ನಾಟಕದ ಗಡಿಯವರೆಗೆ ಮಾತ್ರ ಸಂಚಾರ.
ಬೆಳಗಾವಿಯಿಂದ ಮಹಾರಾಷ್ಟ್ರದ ವಿವಿಧ ನಗರಗಳಿಗೆ ದಿನನಿತ್ಯ 90 ಬಸ್ ಕಾರ್ಯಾಚರಣೆ ಕರ್ನಾಟಕದ ನಿಪ್ಪಾಣಿ ತಾಲೂಕಿನ ಕೊಂಗನೋಳಿಯವರಿಗೆ ಕರ್ನಾಟಕ-ಮಹಾರಾಷ್ಟ್ರ ಗಡಿಯವರಿಗೆ ಮಾತ್ರ ಬಸ್ ಸಂಚಾರ ಎಂದು ಮಾಧ್ಯಮಗಳಿಗೆ ಸಾರಿಗೆ ಸಂಸ್ಥೆಯ ಬೆಳಗಾವಿ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಹುದ್ದಾರ್ ಮಾಹಿತಿ ನೀಡಿದರು.
ಕಾಗವಾಡ ಮಿರಜ ಹಾಗೂ ಚಿಕ್ಕೋಡಿ ಇಂಚಲಕರಂಜಿ ಬಸ್ ಸಂಚಾರ ಯತಾ ಸ್ಥಿತಿ ಪ್ರಾರಂಭ ಮಹಾರಾಷ್ಟ್ರ-ಕರ್ನಾಟಕ ಬಸ್ ಸಂಚಾರ ಯತಾ ಸ್ಥಿತಿ ಪ್ರಾರಂಭ ಆದರೆ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಗೆ ಸಂಚರಿಸುವ ಬಸ್ ಸಂಚಾರ ಮಾತ್ರ ಬಂದ್ ಮಾಡಲಾಗಿದೆ.
ಪ್ರತಿ ದಿನ ಚಿಕ್ಕೋಡಿ ಉಪ ವಿಭಾಗದಿಂದ ಕೊಲ್ಲಾಪುರ್ ಗೆ 80 ಟ್ರಿಪ್ ಸಂಚರಿಸುತ್ತಿದ್ದ ಬಸ್ ಗಳು ಬೆಳಗ್ಗೆ 11 ಗಂಟೆ ಮುಂದೆ ಕೊಲ್ಲಾಪುರ್ ಗೆ ಕರ್ನಾಟಕ ಬಸ್ ಬೀಳುವ ಸಾಧ್ಯತೆ ಇದೆ ಎಂದು ಚಿಕ್ಕೋಡಿ ವಿಭಾಗೀಯ ನಿಯಂತ್ರಣಾಧಿಕಾರಿ ಶಶಿಧರ್ ಮಾಹಿತಿ ನೀಡಿದರು.
